29 ಮಾರ್ಚ್ 2008

ಮೋಡ ಕವಿದ ಬಾನಿನಲ್ಲಿ...



ಕುಕ್ಕೆಯಲ್ಲೀಗ ಮೋಡ ಕವಿದ ಬಾನು....

ಒಳಗೂ..... ಹೊರಗೂ.....

ಮಾಧ್ಯಮಗಳಲ್ಲೂ ಹಾಗೆಯೇ.... ಮಿಂಚು... ಮಳೆಯದ್ದೇ ಸುದ್ದಿ....

ಆದರೆ ಅದೆಲ್ಲವೂ "ಅಕಾಲ ಮಳೆ".....!?

ಅಲ್ಲಿ ರೈತನಿಗೆ ಉಪಟಳ ನೀಡಲು....ಇಲ್ಲಿ!!?

23 ಮಾರ್ಚ್ 2008

"ಭೂತ" ಕಾಲ....!!?



"ಭೂತ"ಕಾಲದ ಅನುಭವ....

ವರ್ತಮಾನದ ಹಾದಿಗೆ ನೆರವಾದೀತೇ.....

ಇವೆರಡೂ ಭವಿಷ್ಯದ ಬದುಕನ್ನು ಭದ್ರವಾಗಿಸಬಲ್ಲುದೇ..?

ಇವೆಲ್ಲವನ್ನೂ ನೆನಪಿಸುವುದೇ "ಭೂತ"ವೇ..?

21 ಮಾರ್ಚ್ 2008

ಹೊರ ನೋಟ.....?



ಒಳಗಿದ್ದಾಗ ಒಂಟಿ ಎಂಬ ಭಾವ....ಒಂಟಿ ದಾರಿ... ಒಂಟಿ ಗುರಿ...ಕನಸುಗಳು...

ಹೊರನೋಡಿದರೆ ಹತ್ತಾರು... ನೂರಾರು ... ಜೀವಗಳ ಪಯಣ..ನೂರಾರು ದಾರಿಗಳು ...ಕನಸುಗಳು...

ಅವುಗಳೆಲ್ಲದರ ನಡುವೆ ನಮ್ಮದೂ ಒಂದು ದಾರಿ... ಗುರಿ... ಕನಸುಗಳು..... ಅದೆಲ್ಲವೂ ಸ್ಪಷ್ಟ....!

20 ಮಾರ್ಚ್ 2008

ಜಲ - ದೇವರು....





ಇಂದು ವಿಶ್ವ ಜಲ ದಿನಾಚರೆಣೆ.....

ಭಗವಂತ ಮತ್ತು ಜಲ.....

ಭಗವಂತನಿಗೆ ಜಾತ್ರೆಯ ನಂತರ ನೀರಲ್ಲಿ ಓಕುಳಿ.... ಉತ್ಸವ...

ಭಕ್ತರಿಗೆ ಸಂಭ್ರಮ.... ಜಲ... ಜಲ.... ಧಾರೆ...

"ಅವನಿದ್ದಾಗ" ಶುದ್ದ ಜಲ... ನೀರ ನೆನಪು....

"ಅವನಿಲ್ಲದಾಗ" ಅದು 'ಬರೀ' ಜಲ...

14 ಮಾರ್ಚ್ 2008

ದಾರಿ ಯಾವುದಯ್ಯಾ...?



ದಾರಿ ಮುಂದಿದೆ...... ಗುರಿಯಿಲ್ಲ......!

ಹಾಗಾಗಿಯೇ ನಮ್ಮದು ಗೊತ್ತು ಗುರಿಯಿಲ್ಲದ ಬದುಕು....

ರಸ್ತೆಯೇ ಬದುಕಿನ ದಾರಿ.... ಬದುಕೇ ರಸ್ತೆ....!.

ಸಂಸಾರದ ನೊಗ ಇಲ್ಲಾರಿಗೆ ? ಹೊರುವೆಯಾ ನೀ "ಬಸವ" ?.

09 ಮಾರ್ಚ್ 2008

ರಂಗದ ಹಿಂದೆ... ಚೌಕಿಯೊಳಗೆ....!



ರಂಗ ಸ್ಥಳದ ಹಿಂದಿನ ತಯಾರಿ ಹೀಗೆ... ರಾತ್ರಿಯಿಡೀ .... ಬಣ್ಣ...ಬಣ್ಣ....

ಬಣ್ಣದ ಬದುಕು ಆರಂಭವಾಗುವುದೇ ಇಲ್ಲಿ....

ರಂಗದಲ್ಲಿ ಬಣ್ಣವಿದ್ದರೆ ಚಂಡೆ - ಮದ್ದಳೆ... , ಶ್ರುತಿ ಎಲ್ಲವೂ ಇದೆ...

ರಂಗದ ಹಿಂದೆ ಏಕಾಂಗಿ......! ಆ ಕಡೆ .... ಈ ಕಡೆ ನೋಡುವವರೇ.....! ಚಂಡೆಯೂ ಇಲ್ಲ..... ಮದ್ದಳೆಯೂ ಇಲ್ಲ ....

ಭಾಗವತರು ಮೊದಲೇ ಇಲ್ಲ.... ಶೃತಿಯೂ ಇಲ್ಲ.....

06 ಮಾರ್ಚ್ 2008

ತುಳುನಾಡ ಹಂಪಿ...



ಶಿಲೆಯಲಿ ನೂರೆಂಟು ಕನಸುಗಳ ಕಾಣುವ....

ಭಕ್ತನಿಗೆ ಬದುಕಿಗೆ ದಾರಿ ತೋರುವ ಈ ಗುಡಿಯೆಲ್ಲಾ ಶಿಲಾಮಯ.... ಎಲ್ಲೆಲ್ಲೂ ಶಿಲೆಗಳೆ....

04 ಮಾರ್ಚ್ 2008

ಹಿಮಗಿರಿ....



ಮುಂಜಾನೆಯ ಬೆಳಕು ಚೆಲ್ಲುವ ಮುನ್ನ...

ಹಳ್ಳಿಯೊಳಗೆ ಕೋಗಿಲೆ ಕೂಗುವ ಸಮಯದಿ ....

ಮಂಜು ಕವಿದ ಬಾನು ... ಹನಿ.. ಹನಿ ..ಇಬ್ಬನಿ ಕರಗಿ ಭುವಿಗೆ ತಾಗುತಿದೆ....

ಆಗ ದೂರದ ಬೆಟ್ಟವೆಲ್ಲಾ ಹಿಮ"ಗಿರಿ"

01 ಮಾರ್ಚ್ 2008

ಮೊಬೈಲ್ ಮಾಯೆ..



ಗಿರಿ ಕಾನನಗಳ ನಡುವೆಯೆ ಮೊಬೈಲ್ ಹುಡುಕಾಟ.....! ಹುಡುಗಾಟ.....?

ಅದುವೇ ಜಗದ ಜೀವನ...! ಅದೊಂದಿದ್ದರೆ ಜನುಮ ಸಾರ್ಥಕ.....?