19 ಸೆಪ್ಟೆಂಬರ್ 2010

ರೋಡ್ ಇಲ್ಲದ ಮೇಲೆ . .





ರೋಡ್ . . ರೋಡ್ . . ರೋಡ್ . .

ಗ್ರಾಮೀಣ ಭಾಗದಲ್ಲಿ ರಸ್ತೆ ದುರವಸ್ಥೆಯಿಂದಾಗಿ ವಿದ್ಯಾರ್ಥಿಗಳ ಪಾಡು ಇದು.

24 ಜುಲೈ 2010

ಹಳ್ಳಿ ಲೈಫ್ . . . !!



ರಸ್ತೆ ಇದೆ . . . ಆದ್ರೆ ಹೋಗೋಕಾಗಲ್ಲ. . . !

ಸೇತುವೆ ಇದೆ . . . ಆದ್ರೆ ಉಪಯೋಗಕ್ಕಿಲ್ಲ. . .!

ಬಸ್ಸಿಸೆ . . . ಆದ್ರೆ ಸಮಯಕ್ಕೆ ಸರಿಯಾಗಿ ಬರಲ್ಲ . .!

ವಾಹನ ಇದೆ. . . ಆದ್ರೆ ಅದು ಪೇಟೇಗೇ ಹೋಗಲ್ಲ . . !

ಇದ್ಯಾವುದು ಅಂತ ನೀವ್ ಹೇಳ್ತಿರಾ. . .??

ಅದೇ ಹಳ್ಳಿ ಜನ . . ಹಳ್ಳಿ ಲೈಫ್ . .!!

09 ಜುಲೈ 2010

ಜಲವೈಭವ . . . .





ಇದು ಜಲ ಕಾವ್ಯ. . . !!

ಕಾನನದ ನಡುವಿನಿಂದ ಸೀಳಿ ಬರುವ ಈ "ಜಲ"ಪಾತಕ್ಕೆ ಏನೊಂದು ಶಕ್ತಿ ?.


ನೀರ ಹನಿಗಳೊಂದಿಗೆ ಲೀನವಾಗುವ . . .

ಮನಸ್ಸನ್ನು ತಂಗಾಳಿಯಲ್ಲಿ ತೇಲಿಸಿ ಬಿಡುವ ಈ ಜಲಧಾರೆಗೆ . . .

ಅದೇನು ಶಕ್ತಿ . . . . !!

04 ಜುಲೈ 2010

11 ಮಾರ್ಚ್ 2010

ಇಲ್ಲಿ ಬದುಕಿಗೂ ಬೆಲೆ ಇದೆ . . . !

ಅಣ್ಣಾ ಕೇಳಿದಿರಾ ಕಾಗೆಯ ಕೂಗು . .

ಕಾಗೆಯೊಂದು ಸತ್ತು ಬಿದ್ದಿದೆ ಇಲ್ಲಿ . .



ಹಾರಿ ಬಂತೊಂದು ಕಾಗೆ. . .



ಅದಕೂ ಇದೆ ಭಾವಬಂಧ. . . ಸಂಬಂಧ .

ಇಲ್ಲಿಲ್ಲ ಜಾತಿಯ ಬಂಧ ...

ಕರೆದಿದೆ ತನ್ನ ಬಳಗವ ಎಲ್ಲಾ. . .



ಬಂದ ತನ್ನವರೆಲ್ಲಾ ಸುತ್ತಿದರು ಜೀವದ ಸುತ್ತ. .

ಆದರೂ ಒಂದು ಆತ್ಮದ ರಕ್ಷಣೆಗೆ ತೊಟ್ಟಿತು

ಒಂಟಿ ಗೆಳೆಯ. . .



ಅದು ಸತ್ತು ಮಲಗಿದೆ ಎಂದು ರೋದಿಸಿದೆ ಎಲ್ಲವೂ. .

ಆದರೂ ಇನ್ನೊಂದು ವಾಹನ ಅಡಿಗೆ ಬೀಳದಿರಲಿ ಎಂದು

ರಸ್ತೆ ಪಕ್ಕಕ್ಕೆ ಎಳೆದಿದೆ ದೇಹ. .



ಈ ಬಂಧ ಎಲ್ಲಿದೆ ನಮ್ಮೊಳಗೆ...

ಇಲ್ಲೆಲ್ಲಾ ಇರುವುದೊಂದೇ ಜಾತಿ .. ಧರ್ಮದ ಬಂಧ...

09 ಮಾರ್ಚ್ 2010

ಗುರಿಯತ್ತ ಹೆಜ್ಜೆ. . . . .



ಮುಂದಿದೆ ಗುರಿಯ ದಾರಿ. . .

ಹಿಂದಿದೆ ನೆನಪುಗಳ ದಾರಿ . . .

ದೂರದಿಂದ ಹೊರಟಿದೆ ಇದೆರಡೂ ಜೊತೆಯಾಗಿ. .

ನೆನಪು ಮತ್ತು ಗುರಿಯ ತಾಳ ತಪ್ಪಿದರೆ ...?

ಎಲ್ಲಿದೆ ಗೆಲುವು..?......

ಬದುಕಲ್ಲೂ ಅದೇ ಅಲ್ಲವೇ . . .!!??

04 ಮಾರ್ಚ್ 2010

ಇಬ್ಬನಿ ದಾರಿ .....



ಮುಂಜಾವಿನ ಇಬ್ಬನಿ . . .

ಬಿದ್ದಿದೆ ದಾರಿಯುದ್ದಕ್ಕೂ ಹರಡಿದೆ ಹನಿ ಹನಿ . . !!.

ಬದುಕಿನ ದಾರಿಯೂ ಹಾಗಲ್ಲವೇ . . .

ನೋವು . . ನಲಿವು . . ಸಂತಸವೆಂಬ ಹನಿಗಳೂ ...

ದಾರಿಯುದ್ದಕ್ಕೂ ಇರುತ್ತವೆ ಹನಿ..ಹನಿ..

ಅದೆಲ್ಲವನೂ ದಾಟಿದಾಗಲೇ . . ನೆಮ್ಮದಿಯ "ಸೂರ್ಯ" ಒಲಿವನು ..

ಅಲ್ಲವೇ . . . !!!

17 ಫೆಬ್ರವರಿ 2010

ಪ್ರತಿ"ಬಿಂಬ" . . .!




ಇದು "ಬಿಂಬ"ದ ಪ್ರತಿಬಿಂಬ . . !

ಅಂದರೆ "ದೇವರ" ಪ್ರತಿರೂಪ . . !!

ದೇವರೆ0ದರೆ ಅದೇ ಅಲ್ಲವೇ . . .?

ಆತ್ಮದ ಪ್ರತಿ"ಬಿಂಬ".....!

ಮನುಷ್ಯತ್ವದ ಪ್ರತಿ"ಬಿಂಬ"......!!


06 ಜನವರಿ 2010

ಇಳಿ ಹೊತ್ತು . .



ಸಂಜೆಯ ಹೊತ್ತಿನಲ್ಲಿ ಎಲ್ಲವೂ ರಂಗುರಂಗಾಗಿದೆ..

ಎಲ್ಲಾ ಆಟಗಳಿಗೂ ಒಂದು "ಬಂಧ"ವಿರುತ್ತದೆ..

ಎಲ್ಲವನ್ನೂ ಅವಲೋಕಿಸುವ ಸಮಯವೂ ಅದು . . ..

ಹಾಗಾಗಿ ಎಲ್ಲಕ್ಕೂ ಬೇಕು ಎಚ್ಚರ..

ಸೂರ್ಯ ಮುಳುಗುವ ಹೊತ್ತು . .

ಬಾನು ಕೆಂಪಾಗಿದೆ . .



ಬಾನು ಕೆಂಪೇರಿದೆ . .

ಭಾಸ್ಕರ ಭುವಿಡೆಗೆ ಇಳಿದಿದ್ದಾನೆ . . .

ಗಿಡ ಮರಗಳು ಹೇಳುತಿವೆ ಇಂದಿನ ವಿದಾಯ....