11 ಮಾರ್ಚ್ 2010

ಇಲ್ಲಿ ಬದುಕಿಗೂ ಬೆಲೆ ಇದೆ . . . !

ಅಣ್ಣಾ ಕೇಳಿದಿರಾ ಕಾಗೆಯ ಕೂಗು . .

ಕಾಗೆಯೊಂದು ಸತ್ತು ಬಿದ್ದಿದೆ ಇಲ್ಲಿ . .



ಹಾರಿ ಬಂತೊಂದು ಕಾಗೆ. . .



ಅದಕೂ ಇದೆ ಭಾವಬಂಧ. . . ಸಂಬಂಧ .

ಇಲ್ಲಿಲ್ಲ ಜಾತಿಯ ಬಂಧ ...

ಕರೆದಿದೆ ತನ್ನ ಬಳಗವ ಎಲ್ಲಾ. . .



ಬಂದ ತನ್ನವರೆಲ್ಲಾ ಸುತ್ತಿದರು ಜೀವದ ಸುತ್ತ. .

ಆದರೂ ಒಂದು ಆತ್ಮದ ರಕ್ಷಣೆಗೆ ತೊಟ್ಟಿತು

ಒಂಟಿ ಗೆಳೆಯ. . .



ಅದು ಸತ್ತು ಮಲಗಿದೆ ಎಂದು ರೋದಿಸಿದೆ ಎಲ್ಲವೂ. .

ಆದರೂ ಇನ್ನೊಂದು ವಾಹನ ಅಡಿಗೆ ಬೀಳದಿರಲಿ ಎಂದು

ರಸ್ತೆ ಪಕ್ಕಕ್ಕೆ ಎಳೆದಿದೆ ದೇಹ. .



ಈ ಬಂಧ ಎಲ್ಲಿದೆ ನಮ್ಮೊಳಗೆ...

ಇಲ್ಲೆಲ್ಲಾ ಇರುವುದೊಂದೇ ಜಾತಿ .. ಧರ್ಮದ ಬಂಧ...

09 ಮಾರ್ಚ್ 2010

ಗುರಿಯತ್ತ ಹೆಜ್ಜೆ. . . . .



ಮುಂದಿದೆ ಗುರಿಯ ದಾರಿ. . .

ಹಿಂದಿದೆ ನೆನಪುಗಳ ದಾರಿ . . .

ದೂರದಿಂದ ಹೊರಟಿದೆ ಇದೆರಡೂ ಜೊತೆಯಾಗಿ. .

ನೆನಪು ಮತ್ತು ಗುರಿಯ ತಾಳ ತಪ್ಪಿದರೆ ...?

ಎಲ್ಲಿದೆ ಗೆಲುವು..?......

ಬದುಕಲ್ಲೂ ಅದೇ ಅಲ್ಲವೇ . . .!!??

04 ಮಾರ್ಚ್ 2010

ಇಬ್ಬನಿ ದಾರಿ .....



ಮುಂಜಾವಿನ ಇಬ್ಬನಿ . . .

ಬಿದ್ದಿದೆ ದಾರಿಯುದ್ದಕ್ಕೂ ಹರಡಿದೆ ಹನಿ ಹನಿ . . !!.

ಬದುಕಿನ ದಾರಿಯೂ ಹಾಗಲ್ಲವೇ . . .

ನೋವು . . ನಲಿವು . . ಸಂತಸವೆಂಬ ಹನಿಗಳೂ ...

ದಾರಿಯುದ್ದಕ್ಕೂ ಇರುತ್ತವೆ ಹನಿ..ಹನಿ..

ಅದೆಲ್ಲವನೂ ದಾಟಿದಾಗಲೇ . . ನೆಮ್ಮದಿಯ "ಸೂರ್ಯ" ಒಲಿವನು ..

ಅಲ್ಲವೇ . . . !!!

17 ಫೆಬ್ರವರಿ 2010

ಪ್ರತಿ"ಬಿಂಬ" . . .!




ಇದು "ಬಿಂಬ"ದ ಪ್ರತಿಬಿಂಬ . . !

ಅಂದರೆ "ದೇವರ" ಪ್ರತಿರೂಪ . . !!

ದೇವರೆ0ದರೆ ಅದೇ ಅಲ್ಲವೇ . . .?

ಆತ್ಮದ ಪ್ರತಿ"ಬಿಂಬ".....!

ಮನುಷ್ಯತ್ವದ ಪ್ರತಿ"ಬಿಂಬ"......!!


06 ಜನವರಿ 2010

ಇಳಿ ಹೊತ್ತು . .



ಸಂಜೆಯ ಹೊತ್ತಿನಲ್ಲಿ ಎಲ್ಲವೂ ರಂಗುರಂಗಾಗಿದೆ..

ಎಲ್ಲಾ ಆಟಗಳಿಗೂ ಒಂದು "ಬಂಧ"ವಿರುತ್ತದೆ..

ಎಲ್ಲವನ್ನೂ ಅವಲೋಕಿಸುವ ಸಮಯವೂ ಅದು . . ..

ಹಾಗಾಗಿ ಎಲ್ಲಕ್ಕೂ ಬೇಕು ಎಚ್ಚರ..

ಸೂರ್ಯ ಮುಳುಗುವ ಹೊತ್ತು . .

ಬಾನು ಕೆಂಪಾಗಿದೆ . .



ಬಾನು ಕೆಂಪೇರಿದೆ . .

ಭಾಸ್ಕರ ಭುವಿಡೆಗೆ ಇಳಿದಿದ್ದಾನೆ . . .

ಗಿಡ ಮರಗಳು ಹೇಳುತಿವೆ ಇಂದಿನ ವಿದಾಯ....

16 ಜೂನ್ 2009

ಹೆಬ್ಬಾಗಿಲು...




ದಾರಿಯಿದೆ.. ಸಾಗಬೇಕಿದೆ ಬಲು ದೂರ...

ತಲೆಯ ಮೇಲಿದೆ ಒಂದಷ್ಟು ಹೊರೆ...

ಬದುಕಲ್ಲೂ ಹಾಗಲ್ವೇ....

ಆಸೆಗಳ... ಕನಸುಗಳ ಹೊರೆಯನ್ನು ಹೊತ್ತು...

ಅವಕಾಶಗಳ ಹೆಬ್ಬಾಗಿಲ ಮುಂದೆ ದಾಟಿ ಸಾಗಿದಾಗ....

ಅಲ್ಲೊಂದು ಲೋಕ ಶುರುವಾಗುತ್ತದೆ.... ಮನಸ್ಸೂ ನಿರಾಳವಾಗುತ್ತದೆ...

ಆದರೆ ಗುರಿ ತಲುಪಲು ಬಾಕಿಯಿದೆ ಇನ್ನೂ ದೂರ...

14 ಜೂನ್ 2009

ಮರಕ್ಕೆ ಮರವೇ ಆಧಾರ....



ಅದು ಹೊರಟಿತ್ತು ಎತ್ತಲೋ ದೂರ...

ದಾರಿ ಮಧ್ಯೆ ಸುಸ್ತಾಗಿ ಮಲಗಿತ್ತು ಅಡ್ಡ....

ಮತ್ತೆ ಮೇಲದ್ದಾಗ ಇಳಿಯಲಾಗದೆ ಒದ್ದಾಡಿತು...



ಆಗ ನೆರವಾದದ್ದು ಮರ....

ಮರಕ್ಕೆ ಮರವೇ ಆಸರೆಯಾಯಿತು ಇಲ್ಲಿ....

ಬದುಕು ಕೂಡಾ ಹಾಗಲ್ಲವೇ ......

ಸೋತು ನಿಂತಾಗ ನೆರವಿಗೆ ಬೇರಾರು ಬಾರಲಾರರು...

ಅದುವರೆಗೆ ಬದುಕನ್ನು ಸಾಗಿಸುತ್ತಿದ್ದ ಎಲ್ಲಾ ನೋವು ನಲಿವುಗಳು ಕೂಡಾ

ಅಶಕ್ತವಾದಾಗ ನೆರವಿಗೆ ಬರುವುದು ಯಾವುದು...??

16 ಏಪ್ರಿಲ್ 2009

ಎರಡು ಚಿತ್ರ..



ಬದುಕೆಂಬ ಸಾಗರದಲ್ಲಿ ...

ನೋವು..ದು:ಖ..ಅವಮಾನ.. ಕಷ್ಟ..ಸುಖವೆಂಬ... ತೆರೆಗಳು ಅಪ್ಪಳಿಸುತ್ತಲೇ ಇರುತ್ತವೆ..

ಕೆಲವೊಂದು ಚಿಕ್ಕದು.. ಇನ್ನೊಂದು ದೊಡ್ಡದು..

ಅದೇ ಕಡಲು ಮತ್ತು ಒಡಲಿನ ನಂಟು...




ಹಾಗಾಗಿ ನಾಳೆಯ ಕನಸಿಗೆ ಇಂದೇ ತಯಾರಿ..

ಎನ್ನ "ದಾರಿ" ಎನಗೆ... ನಿನ್ನ "ದಾರಿ" ನಿನಗೆ...

23 ಮಾರ್ಚ್ 2009

ಭಸ್ಮ.... !!!







ಹೊತ್ತಿತೋ ಹೊತ್ತಿತು....!! ಹುಲ್ಲಿನ ಲಾರಿ......

ಬೆಂಕಿ ಬಿದ್ದಿದೆ ಬನ್ನಿ ....ಲಾರಿಗೆ !! ಓ ಅಣ್ಣಂದಿರೇ.... ಬೇಗ ಬನ್ನಿ...!!

ಇವೆರಡೂ ಕವಿ ವಾಣಿಯ ಸಾಲುಗಳು... ಈಗ ಸಾಂದರ್ಭಿಕ ಸಾಲು...!!


21 ಮಾರ್ಚ್ 2009

ಪ್ರತಿ - ಬಿಂಬ



ಇದು ಬಿಂಬ ಪ್ರತಿಬಿಂಬ...

ನಮ್ಮದೂ ಹಾಗೆಯೇ...

ಅತರಂಗದ ನೋವುಗಳಿಗೆ...ಸಂತಸಗಳಿಗೆ... ಗೆಲುವು-ಸೋಲುಗಳಿಗೆ...

ಒಂದು "ಪ್ರತಿ-ಬಿಂಬ" ಬೇಡವೇ...

ಅದಕ್ಕೂ ಒಂದು ಸೇತುವೆ ಬೇಡವೇ....

ಆ "ಸೇತು"ವೇ ಶಾಶ್ವತವಾಗಿರಬೇಕಲ್ಲವೇ...

ಆ ದಿನ ಬರಲಿ....

23 ಫೆಬ್ರವರಿ 2009

ಬೆಂಕಿ . . ಇದು ಬೆಂಕಿ. .




ಇದು ಬೆಂಕಿ ...

ಭೂತದ ಬೆಂಕಿ...

ಧಗ ಧಗಿಸುವ ಬೆಂಕಿ..

ಭೂತಾರಾಧನೆಯ ಬೆಂಕಿ ಇದು... ಭಕ್ತಿಯ ಬೆಂಕಿ...





29 ಜನವರಿ 2009

ಕೋಳಿ ಜಗಳ....



ಇಲ್ಲಿ ನಡೆಯುತ್ತಿದೆ ಕೋಳಿ ಜಗಳ..

ಈಗ ಅಲ್ಲಿ ಇಲ್ಲಿ ನಡೆಯುತ್ತಲ್ಲಾ ಹಾಗೆ




ಆದರೆ ಇಲ್ಲಿ ನಡೆಯುವುದು ಮಜಾ ಮಾಡಲು.. ಜೂಜು ಮಾಡಲು..

ಆದರೆ ಅಲ್ಲಿ ನಡೆಯುವುದು .. ಸಜೆ ಮಾಡಲು.. ಗಲಿಬಿಲಿ ಮಾಡಿಸಲು..





ಅದಕ್ಕೇ ಹಿರಿಯರು ಹೇಳಿದ್ದು ಅದು ಕೋಳಿ ಜಗಳ....

ಕಾರಣವಿಲ್ಲದೆ ನಡೆಯುವ ಜಗಳ... ಅದೂ ಗೆಳೆಯರ .. ಒಂದೇ ಕುಲದ ನಡುವೆo

13 ಜನವರಿ 2009

ಬೆಳಗಿನ ಬೆಳ್ಳಿಕಿರಣ....




ಬೆಳಕು ಹರಿಯುವ ಹೊತ್ತು......

ಹಕ್ಕಿ ಹಾರುವ ಸಮಯ. .. .

ಕೋಗಿಲೆಯ ಸವಿಗಾನ ಕೇಳುವ ಕ್ಷಣ...

ಬದುಕೆಂಬ ರಥದ ಚಕ್ರ ಉರುಳುವ ಹೊತ್ತು....

....ನೇಸರನ ಈ ಬೆಳಕು,ಕಾನನದೊಳಗಿನ ಆ ಇಂಚರವು

.. ನೀಡುವುದು ಮನಕೆ ಮುದ....