16 ಜೂನ್ 2009

ಹೆಬ್ಬಾಗಿಲು...




ದಾರಿಯಿದೆ.. ಸಾಗಬೇಕಿದೆ ಬಲು ದೂರ...

ತಲೆಯ ಮೇಲಿದೆ ಒಂದಷ್ಟು ಹೊರೆ...

ಬದುಕಲ್ಲೂ ಹಾಗಲ್ವೇ....

ಆಸೆಗಳ... ಕನಸುಗಳ ಹೊರೆಯನ್ನು ಹೊತ್ತು...

ಅವಕಾಶಗಳ ಹೆಬ್ಬಾಗಿಲ ಮುಂದೆ ದಾಟಿ ಸಾಗಿದಾಗ....

ಅಲ್ಲೊಂದು ಲೋಕ ಶುರುವಾಗುತ್ತದೆ.... ಮನಸ್ಸೂ ನಿರಾಳವಾಗುತ್ತದೆ...

ಆದರೆ ಗುರಿ ತಲುಪಲು ಬಾಕಿಯಿದೆ ಇನ್ನೂ ದೂರ...

14 ಜೂನ್ 2009

ಮರಕ್ಕೆ ಮರವೇ ಆಧಾರ....



ಅದು ಹೊರಟಿತ್ತು ಎತ್ತಲೋ ದೂರ...

ದಾರಿ ಮಧ್ಯೆ ಸುಸ್ತಾಗಿ ಮಲಗಿತ್ತು ಅಡ್ಡ....

ಮತ್ತೆ ಮೇಲದ್ದಾಗ ಇಳಿಯಲಾಗದೆ ಒದ್ದಾಡಿತು...



ಆಗ ನೆರವಾದದ್ದು ಮರ....

ಮರಕ್ಕೆ ಮರವೇ ಆಸರೆಯಾಯಿತು ಇಲ್ಲಿ....

ಬದುಕು ಕೂಡಾ ಹಾಗಲ್ಲವೇ ......

ಸೋತು ನಿಂತಾಗ ನೆರವಿಗೆ ಬೇರಾರು ಬಾರಲಾರರು...

ಅದುವರೆಗೆ ಬದುಕನ್ನು ಸಾಗಿಸುತ್ತಿದ್ದ ಎಲ್ಲಾ ನೋವು ನಲಿವುಗಳು ಕೂಡಾ

ಅಶಕ್ತವಾದಾಗ ನೆರವಿಗೆ ಬರುವುದು ಯಾವುದು...??

16 ಏಪ್ರಿಲ್ 2009

ಎರಡು ಚಿತ್ರ..



ಬದುಕೆಂಬ ಸಾಗರದಲ್ಲಿ ...

ನೋವು..ದು:ಖ..ಅವಮಾನ.. ಕಷ್ಟ..ಸುಖವೆಂಬ... ತೆರೆಗಳು ಅಪ್ಪಳಿಸುತ್ತಲೇ ಇರುತ್ತವೆ..

ಕೆಲವೊಂದು ಚಿಕ್ಕದು.. ಇನ್ನೊಂದು ದೊಡ್ಡದು..

ಅದೇ ಕಡಲು ಮತ್ತು ಒಡಲಿನ ನಂಟು...




ಹಾಗಾಗಿ ನಾಳೆಯ ಕನಸಿಗೆ ಇಂದೇ ತಯಾರಿ..

ಎನ್ನ "ದಾರಿ" ಎನಗೆ... ನಿನ್ನ "ದಾರಿ" ನಿನಗೆ...

23 ಮಾರ್ಚ್ 2009

ಭಸ್ಮ.... !!!







ಹೊತ್ತಿತೋ ಹೊತ್ತಿತು....!! ಹುಲ್ಲಿನ ಲಾರಿ......

ಬೆಂಕಿ ಬಿದ್ದಿದೆ ಬನ್ನಿ ....ಲಾರಿಗೆ !! ಓ ಅಣ್ಣಂದಿರೇ.... ಬೇಗ ಬನ್ನಿ...!!

ಇವೆರಡೂ ಕವಿ ವಾಣಿಯ ಸಾಲುಗಳು... ಈಗ ಸಾಂದರ್ಭಿಕ ಸಾಲು...!!


21 ಮಾರ್ಚ್ 2009

ಪ್ರತಿ - ಬಿಂಬ



ಇದು ಬಿಂಬ ಪ್ರತಿಬಿಂಬ...

ನಮ್ಮದೂ ಹಾಗೆಯೇ...

ಅತರಂಗದ ನೋವುಗಳಿಗೆ...ಸಂತಸಗಳಿಗೆ... ಗೆಲುವು-ಸೋಲುಗಳಿಗೆ...

ಒಂದು "ಪ್ರತಿ-ಬಿಂಬ" ಬೇಡವೇ...

ಅದಕ್ಕೂ ಒಂದು ಸೇತುವೆ ಬೇಡವೇ....

ಆ "ಸೇತು"ವೇ ಶಾಶ್ವತವಾಗಿರಬೇಕಲ್ಲವೇ...

ಆ ದಿನ ಬರಲಿ....

23 ಫೆಬ್ರವರಿ 2009

ಬೆಂಕಿ . . ಇದು ಬೆಂಕಿ. .




ಇದು ಬೆಂಕಿ ...

ಭೂತದ ಬೆಂಕಿ...

ಧಗ ಧಗಿಸುವ ಬೆಂಕಿ..

ಭೂತಾರಾಧನೆಯ ಬೆಂಕಿ ಇದು... ಭಕ್ತಿಯ ಬೆಂಕಿ...





29 ಜನವರಿ 2009

ಕೋಳಿ ಜಗಳ....



ಇಲ್ಲಿ ನಡೆಯುತ್ತಿದೆ ಕೋಳಿ ಜಗಳ..

ಈಗ ಅಲ್ಲಿ ಇಲ್ಲಿ ನಡೆಯುತ್ತಲ್ಲಾ ಹಾಗೆ




ಆದರೆ ಇಲ್ಲಿ ನಡೆಯುವುದು ಮಜಾ ಮಾಡಲು.. ಜೂಜು ಮಾಡಲು..

ಆದರೆ ಅಲ್ಲಿ ನಡೆಯುವುದು .. ಸಜೆ ಮಾಡಲು.. ಗಲಿಬಿಲಿ ಮಾಡಿಸಲು..





ಅದಕ್ಕೇ ಹಿರಿಯರು ಹೇಳಿದ್ದು ಅದು ಕೋಳಿ ಜಗಳ....

ಕಾರಣವಿಲ್ಲದೆ ನಡೆಯುವ ಜಗಳ... ಅದೂ ಗೆಳೆಯರ .. ಒಂದೇ ಕುಲದ ನಡುವೆo

13 ಜನವರಿ 2009

ಬೆಳಗಿನ ಬೆಳ್ಳಿಕಿರಣ....




ಬೆಳಕು ಹರಿಯುವ ಹೊತ್ತು......

ಹಕ್ಕಿ ಹಾರುವ ಸಮಯ. .. .

ಕೋಗಿಲೆಯ ಸವಿಗಾನ ಕೇಳುವ ಕ್ಷಣ...

ಬದುಕೆಂಬ ರಥದ ಚಕ್ರ ಉರುಳುವ ಹೊತ್ತು....

....ನೇಸರನ ಈ ಬೆಳಕು,ಕಾನನದೊಳಗಿನ ಆ ಇಂಚರವು

.. ನೀಡುವುದು ಮನಕೆ ಮುದ....