skip to main
|
skip to sidebar
ಉದಯರಾಗ
ವಾಹ್...! ಇದು ಕ್ಯಾಮಾರಾ ಕಣ್ಣು ....!
25 ಏಪ್ರಿಲ್ 2008
ತಂತಿ-ಬೆಂಕಿಯ ಆಟ...?
"ತಂತಿ"ಯೊಳಗೆ ಬೆಳಕೇ..? "ಬೆಳಕಿ"ನೊಳಗೆ ತಂತಿಯೇ..?
ಎಲ್ಲವೂ ಚಂಚಲ.... ಇದು ಅದುವೋ... ಅದು ಇದುವೋ...?
ನಾಗಾಲೋಟದ ಮನಸ್ಸಿಗೆ ಹೊಳೆಯುವುದು ನೂರೆಂಟು ಯೋಚನೆ.. ಹತ್ತಾರು ಕಲ್ಪನೆ...
ಆದರೆ ನಿಜಾಂಶ ಅರಿತಾಗ.......
"ಅದೆಲ್ಲವೂ" ಭ್ರಮೆ...!!?
24 ಏಪ್ರಿಲ್ 2008
ತಾಳ ತಪ್ಪಿದಾಗ.....
ತಾಳ ತಪ್ಪಿದಾಗ ಪರದೆಯ ಹಿಂದಿನ ಕಸರತ್ತು...!
ಆಸರೆಯಾದರು ಒಂದಷ್ಟು ಜನ.... ಉಳಿಯಿತು ಮಾನ...!
ಬದುಕಿನ ವೇದಿಕೆಯಲ್ಲೂ ಹಾಗಲ್ವೇ...!?.
ತಾಳ ತಪ್ಪಿದಾಗ...... ಪರದೆ ಸರಿಯುವ ಹೊತ್ತು ಬಂದಾಗ....
ಬರುವರೇ ಅಷ್ಟು ಜನ...? ನೆರವಾಗುವರೇ "ನಮ್ಮ" ಜನ...?
ಪರದೆಯ ಮುಂದೆ ನಾವೊಬ್ಬರೇ....
ಅದರ ಹಿಂದೆ ಜನರಿದ್ದರೇ ನಾವು "ಜನ"..ಇಲ್ಲದಿದ್ದರೆ ನಾವು "ನಿರ್ಜನ"
19 ಏಪ್ರಿಲ್ 2008
ಹೊತ್ತು ಮುಳುಗುವ ಹೊತ್ತು....
ಸೂರ್ಯ ಮುಳುಗುವ ಸಮಯ....
ತುರ್ತು... ಅವಸರ... ಗೂಡು ಸೇರಿಕೊಳ್ಳುವ ತವಕ....
ಬದುಕಲ್ಲೂ ಹಾಗಲ್ಲವೇ...?
ಬದುಕಿನ ಮುಸ್ಸಂಜೆಯಲ್ಲಿ ಎಲ್ಲವೂ ತುರ್ತು....
ಅವರನ್ನು... ಇವರನ್ನು ನೋಡುವ.. ಮಾತನಾಡುವ ತವಕ...
"ಗೂಡು" ಸೇರುವ ತನಕ....!
16 ಏಪ್ರಿಲ್ 2008
ಅರಳಿದ ಹೂವು....
ಒಂದು ಮಳೆಯು ಇಳೆಗೆ ಬೀಳಲು ..
ಅರಳೀತು ಹೇಗೆ ಹೂವು [ಲಿಲ್ಲಿ]
ಬದುಕಲ್ಲೂ ಹಾಗೇ ಅರಳೀತೇ ಪ್ರೀತಿ..?
ಕರುಣೆ ಇಲ್ಲದ ಮೇಲೆ ಅರಳೀತು ಹೇಗೆ.....?
12 ಏಪ್ರಿಲ್ 2008
"ಒಡಲಿ"ಗೆ "ಕೊಡಲಿ".....!?
"ಒಡಲಿಗೆ" ಸೇರುವ ಕಶ್ಮಲವ ತಡೆವವರಾರು...?
ಅಲ್ಲೊಂದಿಷ್ಟು.... ಇಲ್ಲೊಂದಿಷ್ಟು "ಮಲಿನ"ಗಳು ಸೇರುತ್ತಲೇ ಹೋಗುತ್ತವೆ.....
ಆದರೂ ಅದೆಲ್ಲ ತೊಡೆದು ಹಾಕಲಾರದೆ..... ಒಡಲೊಳಗೆ ಸೇರದಂತೆ ಮಾಡಲಾಗದೆ....
ಅಸಹಾಯಕ ಈ ಬಡ ಜೀವ..... ನೋಡುತ್ತಾ .... ನೋಡುತ್ತಾ ಕೂರುತಿದೆ ಹಾಗೆ ಸುಮ್ಮನೆ.....
10 ಏಪ್ರಿಲ್ 2008
ಬದುಕಿನ ಪಯಣ....?
ಇದು "ಬದುಕಿ"ನ ಪಯಣ.....
ಬದುಕಿನ ಹಾದಿಯಲ್ಲಿ ಕಂಡ "ಹೂವಿನ" ನೆನಪುಗಳು ಎಷ್ಟು ಚಂದ....
"ದೋಣಿ"ಯಲ್ಲಿ ಕುಡುಗೋಲು ಹಾಕಲು "ಒಬ್ಬನೇ".......!!
ಆದರೂ "ದಡ" ಸೇರದ ಬದುಕು.....! ಸಾಗಬೇಕು ದೂರ.... ದೂರ....?
ಇನ್ನೆಷ್ಟು ದೂರ "ತೀರ"ವ ಸೇರಲು....?
[ಚಿತ್ರ :"ನೆಟ್" ನೋಟ]
08 ಏಪ್ರಿಲ್ 2008
ಮರೆಯದ ನೆನಪುಗಳು......
ಬದುಕಿನ ಸಂಜೆಯಲ್ಲಿ ಪಯಣ.....
ದಾರಿ ಯಾವುದೋ....! ನಡೆ ಎಲ್ಲಿಗೋ...?
ಆದರೆ ಅದುವರೆಗಿನ ನಡೆ-ನುಡಿ ಸತ್ಯ....
ನೊಗ ಬಿಚ್ಚಿದ ಎತ್ತಿನಂತೆ, ಗಾಡಿ ಕಳಚಿದ ಚಕ್ರದಂತೆ...ನಿತ್ಯ ಸತ್ಯ...
[ಚಿತ್ರ ಮಾತ್ರಾ : "ನೆಟ್" ನೋಟ]
06 ಏಪ್ರಿಲ್ 2008
"ದೂರ"ದ ಬೆಟ್ಟ...
ದೂರದ ಬೆಟ್ಟ ಕಣ್ಣಿಗೆ ನುಣ್ಣನೆ.....
ಹತ್ತಿರ ... ಹತ್ತಿರ ... ಸಾಗಿದಷ್ಟು ಅದರ ಅಂತರ್ಯದ ಅರಿವಾಗುತ್ತದೆ.....
ಬದುಕಿನ ಪಥದಲ್ಲೂ ಅಂತಹವರು ಎಷ್ಟು ಮಂದಿ...??
02 ಏಪ್ರಿಲ್ 2008
ನೊಗವ ಬಿಚ್ಚಿ ಕಾಯುವ.....
ನೇಗಿಲಯೋಗಿಯ ಮಿತ್ರ....ನೊಗವ ಬಿಚ್ಚಿ ಗಾಡಿ ಕಾಯುವ....!
ದಿನವಿಡೀ ದುಡಿದು ಸುಸ್ತಾಗಿ ಕೊನೆಗೊಂದು ನಿಮಿಷದ ವಿಶ್ರಾಂತಿ...
ಆದರೂ ಇವ ನೇಗಿಲಯೋಗಿಗೆ ಶರಣು.. ನೇಗಿಲಯೋಗಿ ಇವನಿಗೆ ಶರಣು...
ಬದುಕೂ ಹಾಗಲ್ಲವೇ,"ಇವನು - ಅವನಿಗೆ" : "ಅವನು - ಇವನಿಗೆ"....
ಹಾಗಿದ್ದರೇ ಪರಿಪೂರ್ಣ...!!
01 ಏಪ್ರಿಲ್ 2008
ಚೆಲುವಿನ ಚಿತ್ತಾರ .....!?
ಶಿಲೆಗಳು ಸಂಗೀತವಾ.......ಅಲ್ಲ ಇದು ಸಂಗೀತವಲ್ಲ.....
ಶಿಲೆಗಳು ಚಿತ್ತಾರವ ಮೂಡಿಸಿವೆ....ನೀರ ಹರಿವೆಗೆ ತಿದ್ದಿ ತೀಡಿದ ಸ್ಪರ್ಶ....?
ಕೊನೆಗೂ ಮನಮೋಹಕ "ಚೆಲುವಿನ ಚಿತ್ತಾರ"....!?
ಮನಸ್ಸಿನೊಳಗೂ ಅದೆಷ್ಟು "ಚಿತ್ತಾರ"ಗಳು....!?
29 ಮಾರ್ಚ್ 2008
ಮೋಡ ಕವಿದ ಬಾನಿನಲ್ಲಿ...
ಕುಕ್ಕೆಯಲ್ಲೀಗ ಮೋಡ ಕವಿದ ಬಾನು....
ಒಳಗೂ..... ಹೊರಗೂ.....
ಮಾಧ್ಯಮಗಳಲ್ಲೂ ಹಾಗೆಯೇ.... ಮಿಂಚು... ಮಳೆಯದ್ದೇ ಸುದ್ದಿ....
ಆದರೆ ಅದೆಲ್ಲವೂ "ಅಕಾಲ ಮಳೆ".....!?
ಅಲ್ಲಿ ರೈತನಿಗೆ ಉಪಟಳ ನೀಡಲು....ಇಲ್ಲಿ!!?
23 ಮಾರ್ಚ್ 2008
"ಭೂತ" ಕಾಲ....!!?
"ಭೂತ"ಕಾಲದ ಅನುಭವ....
ವರ್ತಮಾನದ ಹಾದಿಗೆ ನೆರವಾದೀತೇ.....
ಇವೆರಡೂ ಭವಿಷ್ಯದ ಬದುಕನ್ನು ಭದ್ರವಾಗಿಸಬಲ್ಲುದೇ..?
ಇವೆಲ್ಲವನ್ನೂ ನೆನಪಿಸುವುದೇ "ಭೂತ"ವೇ..?
21 ಮಾರ್ಚ್ 2008
ಹೊರ ನೋಟ.....?
ಒಳಗಿದ್ದಾಗ ಒಂಟಿ ಎಂಬ ಭಾವ....ಒಂಟಿ ದಾರಿ... ಒಂಟಿ ಗುರಿ...ಕನಸುಗಳು...
ಹೊರನೋಡಿದರೆ ಹತ್ತಾರು... ನೂರಾರು ... ಜೀವಗಳ ಪಯಣ..ನೂರಾರು ದಾರಿಗಳು ...ಕನಸುಗಳು...
ಅವುಗಳೆಲ್ಲದರ ನಡುವೆ ನಮ್ಮದೂ ಒಂದು ದಾರಿ... ಗುರಿ... ಕನಸುಗಳು..... ಅದೆಲ್ಲವೂ ಸ್ಪಷ್ಟ....!
20 ಮಾರ್ಚ್ 2008
ಜಲ - ದೇವರು....
ಇಂದು ವಿಶ್ವ ಜಲ ದಿನಾಚರೆಣೆ.....
ಭಗವಂತ ಮತ್ತು ಜಲ.....
ಭಗವಂತನಿಗೆ ಜಾತ್ರೆಯ ನಂತರ ನೀರಲ್ಲಿ ಓಕುಳಿ.... ಉತ್ಸವ...
ಭಕ್ತರಿಗೆ ಸಂಭ್ರಮ.... ಜಲ... ಜಲ.... ಧಾರೆ...
"ಅವನಿದ್ದಾಗ" ಶುದ್ದ ಜಲ... ನೀರ ನೆನಪು....
"ಅವನಿಲ್ಲದಾಗ" ಅದು 'ಬರೀ' ಜಲ...
14 ಮಾರ್ಚ್ 2008
ದಾರಿ ಯಾವುದಯ್ಯಾ...?
ದಾರಿ ಮುಂದಿದೆ...... ಗುರಿಯಿಲ್ಲ......!
ಹಾಗಾಗಿಯೇ ನಮ್ಮದು ಗೊತ್ತು ಗುರಿಯಿಲ್ಲದ ಬದುಕು....
ರಸ್ತೆಯೇ ಬದುಕಿನ ದಾರಿ.... ಬದುಕೇ ರಸ್ತೆ....!.
ಸಂಸಾರದ ನೊಗ ಇಲ್ಲಾರಿಗೆ ? ಹೊರುವೆಯಾ ನೀ "ಬಸವ" ?.
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಮನಸ್ಸು ಅರಳಲಿ.....
ನಾನು ಹೀಗೆ..
ಮಹೇಶ್ ಪುಚ್ಚಪ್ಪಾಡಿ
ಕೃಷಿಕ , ಪತ್ರಕರ್ತ
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
ಚಿತ್ರ..
▼
2011
(2)
▼
ಫೆಬ್ರವರಿ
(1)
ಇದೇ ರಸ್ತೆನಾ . .?
►
ಜನವರಿ
(1)
►
2010
(11)
►
ಸೆಪ್ಟೆಂಬರ್
(1)
►
ಜುಲೈ
(3)
►
ಮಾರ್ಚ್
(3)
►
ಫೆಬ್ರವರಿ
(1)
►
ಜನವರಿ
(3)
►
2009
(8)
►
ಜೂನ್
(2)
►
ಏಪ್ರಿಲ್
(1)
►
ಮಾರ್ಚ್
(2)
►
ಫೆಬ್ರವರಿ
(1)
►
ಜನವರಿ
(2)
►
2008
(47)
►
ಡಿಸೆಂಬರ್
(1)
►
ನವೆಂಬರ್
(2)
►
ಅಕ್ಟೋಬರ್
(5)
►
ಸೆಪ್ಟೆಂಬರ್
(1)
►
ಆಗಸ್ಟ್
(5)
►
ಜೂನ್
(2)
►
ಮೇ
(5)
►
ಏಪ್ರಿಲ್
(10)
►
ಮಾರ್ಚ್
(9)
►
ಫೆಬ್ರವರಿ
(7)
ಬಂದವರು...
Branica Counters
ನೀವು ಎಲ್ಲಿಯವರು ?
Feedjit Live Blog Stats